ಅನನ್ಯ ಹೇಮೆ

ಮುಚ್ಚಿಕೊಂಡ ಕದಗಳ
ಆಹ್ವಾನವಿಲ್ಲದ ಅಂತಃಪುರದೊಳಗೂ
ಹೇಗೋ ನುಗ್ಗಿಬಿಡುತ್ತಾಳೆ
ಗೊತ್ತೇ ಆಗದಂತೆ
ಮೆಲ್ಲ ಮೆಲ್ಲಗೆ ಗೂಡುಕಟ್ಟಿ
ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ
ಇವಳದೇ ಜೀವಭಾವ
ಮೈಮನಗಳ ತುಂಬಿಕೊಂಡು
ಮೊಟ್ಟೆಯೊಡೆದು ಹುಟ್ಟಿಬಂದ
ಕನಸಿನ ಕಂದನಿಗೆ
ವರ್ಣನೆಗೆ ಸಿಲುಕದ
ಅದೆಷ್ಟು ವರ್ಣಗಳು!
ಒಳಗೆಲ್ಲಾ ಹೋಲಿ
ಎರಚಿದ ರಂಗುಗಳು!

ಬಣ್ಣದ ಅಂತಃಪುರಕೆಲ್ಲ
ಜೀವ ಬಂದಿದೆ ಈಗ
ಇವಳು ಕಚಗುಳಿ ಇರಿಸಿ
ಕುಣಿಸಿದಂತೆಲ್ಲಾ
ತಕಥೈ ಕುಣಿಯುತ್ತಾ
ಅಪೂರ್ಣ ಕಥೆಗಳೇ
ಇತಿಹಾಸವಾಗಿಬಿಡುವ
ಈ ನಾಡಿನಲ್ಲಿ
ಮಾನುಷ ಬಣ್ಣಗಳು
ಇವಳ ಆವ್ಹಾಯಿಸಿಕೊಂಡೂ
ಅರ್ಥವಿಲ್ಲದ ಕಥೆಗಳಾಗಿಬಿಡುತ್ತವೆ.

ಜೀವ ಸೆಲೆಯುಕ್ಕಿಸುವ
ಇವಳು ಮಾತ್ರ
ಏನೂ ಗೊತ್ತಿಲ್ಲದಂತೆ ಒಳಗೇ
ಎಂದೆಂದಿಗೂ ಮುಗಿಯದ
ಜೀವಂತ ಕವಿತೆಯಾಗಿ ಉಕ್ಕುತ್ತಾ
ಹರಿಯುತ್ತಲೇ ಇರುತ್ತಾಳೆ
ಎಲ್ಲೆಡೆಗೆ ಹಬ್ಬಿ
ಎಲ್ಲರನೂ ತಬ್ಬಿ
ಪ್ರೇಮಸಂದೇಶ ಸಾರುತ್ತಲೇ ಉಳಿಯುತ್ತಾಳೆ
ಈ ಅನನ್ಯ ಹೇಮೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವತಾರಿ ಬರುತ್ತಾನೆ
Next post ಶೋಭಾಯಾತ್ರೆ ಹೊಂಟ ಯಡೂರಿ ಹಿಕಮತ್ತು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys